Jump to content

User:Kurugodu RP/sandbox

Mayelana Wikipedia

ರ೦ಗನತಿಟ್ಟು ಪಕ್ಷಿಧಾಮ (Ranganthittu Bird Sanctuary) ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ. ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ. ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ  ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ ಈ ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳ ಗೊ೦ಡಿದೆ. . ರ೦ಗನತಿಟ್ಟು ಚರಿತ್ರಾಳ ಪಟ್ಟಣವಾದ ಶ್ರೀರ೦ಗಪಟ್ಟಣದಿ೦ದ ಮೂರು ಕಿ.ಮೀ ದೂರದಲ್ಲಿ ಮೈಸೂರಿನಿಂದ ೧೬ ಕಿ.ಮಿ ಉತ್ತರದಲ್ಲಿದೆ 2011-12 ನೇ ಸಾಲಿನಲ್ಲಿ 2.90 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿರುವುದನ್ನು ಗಮನಿಸಿದರೆ ಭಾರತದಲ್ಲಿ ಇದರ ಮಹತ್ವದ ಸ್ಥಾನವನ್ನು ತಿಳಿಯಬಹುದು.


ಧಾಮದ ಇತಿಹಾಸ

[hlela | Hlela umthombo]

ಬೆಳ್ಳಕ್ಕಿ

ಬಕಪಕ್ಷಿ

1648 ರಲ್ಲಿ ಆಗಿನ ಮೈಸೂರು ಸ೦ಸ್ಥಾನದ ಅರಸರಾದ ಕ೦ಠೀರವ ನರಸಿ೦ಹರಾಜ ಒಡೆಯರ್ ಅವರು ಕಾವೇರಿ ನದಿಗೆ ಅಡ್ಡಲಾಗಿ ಒಡ್ಡನ್ನು ಕಟ್ಟಿಸಿದಾಗ ಈ ದ್ವೀಪಗಳು ಅಸ್ಥಿತ್ವಕ್ಕೆ ಬ೦ದವು. 1940ರಲ್ಲಿ ಪಕ್ಷಿವಿಜ್ಞಾನ ತಜ್ಞರಾದ ಶ್ರೀ ಸಲೀ೦ ಅಲಿ ಅವರು ಈ ದ್ವೀಪ ಸಮೂಹಗಳು ಪಕ್ಷಿಗಳು ಗೂಡು ಕಟ್ಟಲು ಉತ್ತಮ ತಾಣವಾಗಿರುವದನ್ನು ಗಮನಿಸಿ ಮೈಸೂರು ಸ೦ಸ್ಥಾನದ ಆಗಿನ ರಾಜರಾದ ಒಡೆಯರ್ ಅವರನ್ನು ಈ ದ್ವೀಪ ಸಮೂಹಗಳನ್ನು ಅಭಯಧಾಮವೆ೦ದು ಘೋಷಿಸಲು ಮನಒಲಿಸಿದರು. ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯು ಈ ಪಕ್ಷಿಧಾಮದ ನಿರ್ವಹಣೆಯ ಜವಾಬ್ಧಾರಿಯನ್ನು ವಹಿಸಿದೆ ಅಲ್ಲದೆ ಇದರ ಪ್ರಗತಿಯ ದಿಟ್ಟಿನಲ್ಲಿ ಸುತ್ತಲಿನ ಖಾಸಗಿ ಭೂಪ್ರದೇಶಗಳನ್ನು ಕೊಂಡು ಕೊಂಡು, ಈ ಪಕ್ಷಿಧಾಮವನ್ನು ವಿಸ್ತರಿಸಿ, ರಕ್ಷಿಸಿ ಇದರ ಅಭಿವೃದ್ಧಿಗೂ ಪ್ರಯತ್ನಿಸುತ್ತಿದೆ.


ಪ್ರವಾಹ

[hlela | Hlela umthombo]

ಮಳೆಗಾಲದಲ್ಲಿ, ಹತ್ತಿರದ ಕೃಷ್ಣರಾಜಸಾಗರ ಅಣೆಕಟ್ಟಿನಿ೦ದ ಅಧಿಕ ನೀರನ್ನು ಹೊರಬಿಟ್ಟಾಗ ಈ ದ್ವೀಪಸಮೂಹಗಳಿಗೆ ಅತಿಯಾದ ಪ್ರವಾಹದ ಭೀತಿಯಿರುತ್ತದೆ. ಅತಿಯಾದ ಪ್ರವಾಹವಿದ್ದಾಗ ಪ್ರವಾಸಿಗರನ್ನು ದೋಣಿಗಳ ಮೂಲಕ ಕರೆದೊಯ್ಯುವುದನ್ನು ನಿಷೇಧಿಸ ಲಾಗುತ್ತದೆ. ಕೇವಲ ದೂರದಿ೦ದಲೇ ಪಕ್ಷಿಗಳು ಗೂಡುಕಟ್ಟುವುದನ್ನು ವೀಕ್ಷಿಸಲು ಅನುಮತಿ ನೀಡಲಾಗುತ್ತದೆ. ಕಳೆದ ಕೆಲ ದಶಕಗಳಲ್ಲಿ ಆಗಾಗ ಉ೦ಟಾಗುವ ಪ್ರವಾಹಗಳಿ೦ದಾಗಿ ಮೂರು ದ್ವೀಪಗಳ ಕೆಲಭಾಗಗಳಿಗೆ ಧಕ್ಕೆಯಾಗಿದೆ.